May 19, 2024

Bhavana Tv

Its Your Channel

ಬಿಜೆಪಿಯು ತನ್ನ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಬೇರೆ ಪಕ್ಷದ ಕಾರ್ಯಕರ್ತರನ್ನು, ಮುಖಂಡರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಕುತಂತ್ರಕ್ಕೆ ಮುಂದಾಗಿದೆ ಎಂದು ಜೆಡಿಎಸ್ ತಾಲ್ಲೂಕಾಧ್ಯಕ್ಷ ಸಿ.ಜಿ.ಹೆಗಡೆ ಆರೋಪ.

ಕುಮಟಾ: ಸೋಮವಾರ ಜೆಡಿಎಸ್ ನ ಹಿಂದಿನ ಅಧ್ಯಕ್ಷ ಮಂಜುನಾಥ ಪಟಗಾರ ಅವರ ಜೊತೆ ವಿವಿಧ ಪಕ್ಷಗಳ ೨೫ಕ್ಕೂ ಹೆಚ್ಚು ಪ್ರಮುಖರು ಬಿಜೆಪಿ ಸೇರ್ಪಡೆಗೊಂಡ ಕುರಿತು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭಾರೀ ಅಂತರದಿOದ ದಿನಕರ ಶೆಟ್ಟಿ ಅವರು ಗೆದ್ದಿರಬಹುದು. ಆದರೂ ಈಗ ಇತರೆ ಪಕ್ಷದವರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಕಸರತ್ತು ನಡೆಸುತ್ತಿರುವುದರ ಹಿಂದೆ ತಮ್ಮ ಮೇಲೆಯೇ ಅವಿಶ್ವಾಸ ಹೊಂದಿರುವ ವಿಚಾರವು ಅಡಗಿ ಕುಳಿತಿದೆ. ಆಡಳಿತದ ವೈಫಲ್ಯವು ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಭಯ ಬಿಜೆಪಿಯಲ್ಲಿದೆ. ಮುಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಕಾಣಬಹುದೆಂಬ ಆತಂಕ ದಿನಕರ ಶೆಟ್ಟಿ ಅವರನ್ನು ಗಾಢವಾಗಿ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಸೂರಜ ನಾಯ್ಕ ಸೋನಿ ಮಾತನಾಡಿ, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಪ್ರಬಲ ವಿರೋಧ ಪಕ್ಷವೆನಿಸಿದೆ. ನಮ್ಮದು ರೈತರ ಪಕ್ಷವಾಗಿದ್ದು ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತೇವೆ. ಹೆಚ್ಚು ಸಕ್ರಿಯವಾಗಿ ಜನಪರ ಕಾರ್ಯಗಳನ್ನು ಮಾಡುತ್ತಿರುವುದೇ ಇದಕ್ಕೆ ಉದಾಹರಣೆಯಾಗಿದೆ ಎಂದೂ ಹೇಳಿದರು.

error: