May 3, 2024

Bhavana Tv

Its Your Channel

ಶಾಸಕ ದಿನಕರ ಶೆಟ್ಟಿ ಹೇಳಿಕೆ ಖಂಡನಾರ್ಹ ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದಿOದಲೂ ಮನವಿ.

ಭಟ್ಕಳ: ಕುಮುಟಾದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರು ಪತ್ರಿಕಾಗೊಷ್ಟಿಗೆ ಹಣ ಕೇಳುತ್ತಾರೆ. ಬೇರೆಯವರ ಹಣದಿಂದಲೇ ಬದುಕುತ್ತಾರೆ ಎಂದು ಜಿಲ್ಲೆಯ ಪತ್ರಕರ್ತರನ್ನು ಅವಹೇಳನ ಮಾಡುವ ಮೂಲಕ ಕೀಳು ಮಟ್ಟದ ಮನಸ್ಥಿತಿ ತೋರಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ನೋವುಂಟಾಗಿದ್ದು ತಕ್ಷಣ ಅವರ ಮೇಲೆ ಕ್ರಮ ಜರುಗಿಸಬೇಕು. ಇಂತಹ ಹೇಳಿಕೆಯಿಂದ ಪತ್ರಕರ್ತರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುದು ಕಷ್ಟವಾಗುತ್ತದೆ. ಸದಾ ಸಮಾಜದ ಮಧ್ಯದಲ್ಲಿರುವ ಪತ್ರಕರ್ತರಿಗೆ ಇಂತಹ ತೊಂದರೆಯಾಗುವ ಜೊತೆ ದುಷ್ಕರ್ಮಿಗಳು ದುರುಪಯೋಗವಾಗುವ ಸಾಧ್ಯತೆ ಇದೆ. ಇಂತಹ ಹೇಳಿಕೆ ನೀಡುವುದನ್ನು ತಡೆಯಬೇಕು. ಇತ್ತಿಚಿಗೆ ಬೆಂಗಳೂರಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಪತ್ರಕರ್ತರ ಮೇಲೆ ಹಲ್ಲೆಯಾಗಿದೆ. ಈ ಹಲ್ಲೆ ಖಂಡನೀಯವಾಗಿದೆ. ರಾಜ್ಯದಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಭಟ್ಕಳ ಸಹಾಯಕ ಆಯುಕ್ತರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಭಟ್ಕಳ ತಾಲೂಕ ಕಾರ್ಯನಿರತ ಪತ್ರಕರ್ತರು ಹಾಜರಿದ್ದರು.

error: