ಹೊನ್ನಾವರ: ದಿನಾಂಕ ೩೧/೩/೨೦೨೧ರಂದು ಸೇವಾ ನಿವೃತ್ತರಾದ ಹೊನ್ನಾವರ ತಾಲೂಕಿನ ಶಿಕ್ಷಕಿಯರಾದ ಕಲಾವತಿ, ಜಿ.ಭಟ್. ಸ,ಹಿ,ಪ್ರಾ ಶಾಲೆ ಕಬಾಡ ಕೇರಿ, ಸುಮಾರು ೨೨ ವರ್ಷಗಳ ಕಾಲ ಸೇವೆ, ಹಾಗೂ ಪ್ರೇಮ ಕೆ ಹೆಗಡೆ .ಸ,ಹಿ,ಪ್ರಾ ಶಾಲೆ ರಾಮೇಶ್ವರಕಂಬಿ, ೩೬ ವರ್ಷಗಳ ಕಾಲ ಸೇವೆ ಮಾಡಿದ ಇವರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊನ್ನಾವರ ಇವರು ಅವರ ಶಾಲೆಗೆ ತೆರಳಿ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ರಾಮೇಶ್ವರಕಂಬಿ ಶಾಲೆಯ ಕಾರ್ಯಕ್ರಮದಲ್ಲಿ ಹಾಜರಿದ್ದ ನಮ್ಮ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾಕ್ಟರ್ ಸವಿತಾ ಪ್ರಕಾಶ್ ನಾಯಕ್, ರವರು ಸಂಘದ ಈ ಕಾರ್ಯವನ್ನು ಅತ್ಯಂತ ಅಭಿಮಾನಪೂರ್ವಕವಾಗಿ ಶ್ಲಾಘಿಸಿದರು. ಇದೊಂದು ಮಾದರಿ ಕಾರ್ಯಕ್ರಮ ,ಒಬ್ಬ ಶಿಕ್ಷಕನಿಗೆ ತನ್ನ ವೃತ್ತಿಜೀವನದ ಕೊನೆಯ ದಿನ ಅತ್ಯಂತ ಭಾವನಾತ್ಮಕ ವಾಗಿರುತ್ತದೆ, ಕೊನೆಯ ಕ್ಷಣದಲ್ಲಿ ಪ್ರೀತಿಯಿಂದ ಮಾತನಾಡಿ ಶುಭ ಹಾರೈಸಿ ಅವರನ್ನು ಸನ್ಮಾನಿಸಿದ ಕ್ಷಣ ಎಲ್ಲಕ್ಕಿಂತ ಮಿಗಿಲಾದುದು ,ಸಂಘದ ಈ ಕಾರ್ಯ ಪ್ರಶಂಸನೀಯ ಇದನ್ನು ಮುಂದುವರಿಸಿಕೊAಡು ಹೋಗಬೇಕು ಎಂದು ಹೇಳಿದರು. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು ನಿವೃತ್ತರ ಸುಖಮಯವಾಗಲಿ ಎಂದು ಹಾರೈಸಿದರು. ಸಂಘದ ಅಧ್ಯಕ್ಷರಾದ ಎಂ ಜಿ ನಾಯ್ಕ ಅವರು ಮಾತನಾಡಿ ನಮ್ಮದು ಶಿಕ್ಷಕರ ಕುಟುಂಬ ನಮ್ಮ ಕುಟುಂಬ ಸದಸ್ಯರು ವೃತ್ತಿಯಿಂದ ನಿವೃತ್ತರಾದ ಸಂದರ್ಭದಲ್ಲಿ ನಾವೆಲ್ಲರೂ ಸೇರಿ ಪ್ರೀತಿಯಿಂದ ಮಾತನಾಡಿ ಸನ್ಮಾನಿಸಿ ಶುಭ ಹಾರೈಸಿ ಬೀಳ್ಕೊಡುವುದು ನಮ್ಮ ಸಂಪ್ರದಾಯ, ನಮ್ಮ ನೂತನ ಸಂಘಕ ಅಸ್ತಿತ್ವ ಕ್ಕೆ ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮ ಅಳವಡಿಸಿಕೊಂಡು ನಮ್ಮ ಶಿಕ್ಷಕರು ನಿವೃತ್ತರಾಗುವ ದಿವಸ ಅವರಿದ್ದಲ್ಲಿಗೆ ತೆರಳಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು. ಸನ್ಮಾನಿತ ಶಿಕ್ಷಕ ಭಗಿನಿಯರು ತುಂಬಾ ಹರ್ಷ ವ್ಯಕ್ತಪಡಿಸಿ ನಮ್ಮೆಲ್ಲ ಶಿಕ್ಷಕ ಬಂಧುಗಳು ಸೇರಿ ನಮ್ಮನ್ನು ಬೀಳ್ಕೊಟ್ಟ ಕ್ಷಣ ಅತ್ಯಂತ ಅಮೂಲ್ಯವಾದದ್ದು ಇದು ಎಲ್ಲ ಪ್ರಶಸ್ತಿಗಿಂತ ಮಿಗಿಲಾದದ್ದು ಎಂದು ಭಾವುಕರಾದರು. ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಪದಾಧಿಕಾರಿಗಳು ಪ್ರತಿನಿಧಿಗಳು ಹಾಗೂ ಸಿ.ಆರ್.ಪಿ.ಗಳು, ಶಿಕ್ಷಣ ಸಂಯೋಜಕರು ,ಹಾಜರಿದ್ದು ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.