ಕುಮಟಾ: ತಾಲೂಕಿನ ಹೆಗಡೆಯ ನಿವಾಸಿ ಡಾ ಗೋಪಾಲಕೃಷ್ಣ ಗಣಪತಿ ಹೆಗಡೆ,ಹಾಗೂ ವಿಜಯಾ ಗೋಪಾಲಕೃಷ್ಣ ಹೆಗಡೆ ದಂಪತಿಗಳು ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ೧೯ ಚಿಕಿತ್ಸೆಗಾಗಿ ತಾಲೂಕಾ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಇರುವ ಕಾರಣ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ತೊಂದರೆಯಾಗದoತೆ ಚಿಕಿತ್ಸೆ ನೀಡಿ ಹತ್ತು ದಿನಗಳ ಬಳಿಕ ಸಂಪೂರ್ಣ ಗುಣಮುಖರಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಬಂದ ಬಳಿಕ ಮನೆಗೆ ತೆರಳಿದ್ದರು.
ಆದರೆ ತಮಗೆ ಉತ್ತಮ ಚಿಕಿತ್ಸೆ ನೀಡಿದ ಸರ್ಕಾರಿ ಆಸ್ಪತ್ರೆಗೆ ಎನನ್ನಾದರೂ ನೀಡಬೇಕೆಂದುಕೊoಡಿದ್ದ ದಂಪತಿಗಳು, ಶುಕ್ರವಾರ ತಮ್ಮ ಮಗನಾದ ಪವನ ಗೋಪಾಲಕೃಷ್ಣ ಹೆಗಡೆಯ ಮೂಲಕ ಮೂರು ಫ್ಯಾನ್ ಗಳನ್ನು ಆಸ್ಪತ್ರೆಗೆ ಉಚಿತವಾಗಿ ನೀಡಿ ಕೃತಜ್ಞತೆ ತಿಳಿಸಿದ್ದಾರೆ.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ