May 15, 2024

Bhavana Tv

Its Your Channel

ಮಾಜಿ ಶಾಸಕ ಪಿ.ಎಸ್.ಜೈವಂತ ನಿಧನ

ಮಾಜಿ ಶಾಸಕರು, ಹಿರಿಯ ಸಾಮಾಜಿಕ ಧುರೀಣರು ಶಿಕ್ಷಣ ಪ್ರೇಮಿಯಾದ ಪಿ.ಎಸ್.ಜೈವಂತ ಅವರು ಶುಕ್ರವಾರ ನಿಧನರಾದರು.
ಕಳೆದ ಕೆಲವು ತಿಂಗಳಿoದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಶುಕ್ರವಾರ ಬೆಂಗಳುರಿನಲ್ಲಿ ನಿಧನರಾಗಿದ್ದಾರೆ.

ಶಾಸಕರಾಗಿ ಹಾಗೂ ಉತ್ತರಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಪಿ.ಎಸ್.ಜೈವಂತ ಅವರು ಕೈಗೊಂಡ ಕಾರ್ಯಗಳು ಅನನ್ಯ, ಶ್ರೀಯುತರ ನಿಧನದಿಂದಾಗಿ ಜಿಲ್ಲೆಯು ಹಿರಿಯ ರಾಜಕೀಯ ಮುತ್ಸಧ್ದಿಯನ್ನು ಕಳೆದುಕೊಂಡಿದು ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
೧೯೯೪ರಲ್ಲಿ ಮೊದಲ ಬಾರಿ ಶಾಸಕರಾಗಿದ್ದ ಅವರು ೧೯೯೮ರಲ್ಲಿ ಅಬಕಾರಿ ಸಚಿವರಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.

ಭಗವಂತ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ

error: