ಹೊನ್ನಾವರ ; ಎರಡು ದಿನಗಳಿಂದ ನೆಡೆಯುತ್ತಿರುವ ಸಾರಿಗೆ ಇಲಾಖೆಯ ಮುಷ್ಕರಕ್ಕೆ ಹೊನ್ನಾವರದಲ್ಲಿ ಶನಿವಾರ ಬೆಂಬಲ ದೊರೆತ್ತಿದೆ. ಹೊನ್ನಾವರದಲ್ಲಿ ಎರಡು ದಿನಗಳಿಂದ ಮುಷ್ಕರಕ್ಕೆ ಯಾವುದೇ ಬೆಂಬಲ ದೊರೆತ್ತಿರಲಿಲ್ಲ. ಸಾರಿಗೆ ನೌಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಆಗ್ರಹಿಸಿತ್ತಿದ್ದರು ಸರ್ಕಾರ ಅದರ ಬಗ್ಗೆ ಇವರೆಗೂ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ವಿರೋಧಿಸಿ ಇವತ್ತು ಬುಹುತೇಕ ಎಲ್ಲ ಸಾರಿಗೆ ಬಸ್ಸುಗಳನ್ನು ಬಂದ್ ಮಾಡಲಾಗಿದೆ.
ಹೊನ್ನಾವರದಲ್ಲಿ ಬಸ್ಸಗಳು ಯಾವುದು ರಸ್ತೆಗೆ ಇಳಿಯದೇ ಇರುವುದರಿಂದ ಜನ ಸಾಮಾನ್ಯರಿಗೆ ತುಂಬ ತೊಂದರೆ ಉಂಟಾಗಿದ್ದು,. ಹೊರ ಜಿಲ್ಲೆಯಿಂದ ಯಾವುದೇ ಬಸ್ ಬರದೇ ಇರುವ ತಾಲೂಕಿನಿಂದ ಗ್ರಾಮೀಣ ಭಾಗಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದ ಬಸ್ ಇಲ್ಲದೇ ಪ್ರಯಾಣಿಕರು ಪರದಾಟ ನಡೆಸಿದರು. ವಾರದ ಸಂತೆ ಹಿನ್ನಲೆಯಲ್ಲಿ ಪಟ್ಟಣದತ್ತ ಬರುತ್ತಿದ್ದ ಗ್ರಾಮೀಣ ಭಾಗದ ಜನತೆಗೆ ಟೆಂಪೋ ಸೇರಿದಂತೆ ಇತರೆ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ದಿಡೀರ್ ಸಾರಿಗೆ ಮುಷ್ಕರದ ಹಿನ್ನಲೆಯಿಂದ ತಾಲೂಕಿನ ಬಸ್ ನಿಲ್ದಾಣ ರಸ್ತೆ ಆಗಿರುದರಿಂದ ಇಂದು ಬಸ್ ನಿಲ್ದಾಣದ ಸ್ಥಳ ಬದಲಾಯಿತೆ ಎನ್ನುವ ಪ್ರಶ್ನೆ ಮೂಡಿತ್ತು. ಒಟ್ಟಿನಲ್ಲಿ ಇದೇ ಸ್ಥಿತಿ ಮುಂದುವರೆದಲ್ಲಿ ತಾಲೂಕಿನ ಜನತೆ ಪಟ್ಟಣಕ್ಕೆ ಬಂದರೂ ಹೊರ ಜಿಲ್ಲೆಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಸರ್ಕಾರ ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ