ಭಟ್ಕಳ: ಕಡವಿನಕಟ್ಟಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.೧೪ ಸೋಮವಾರ ಬೆಳಿಗ್ಗೆ ೬.೪೭ರಿಂದ ಡಿ.೧೫ ಮಂಗಳವಾರ ಬೆಳಿಗ್ಗೆ ೬.೪೭ರ ತನಕ ಆಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ತಿಕ ಕೃಷ್ಣ ಅಮವಾಸ್ಯೆಯಂದು ಭಜನಾ ಕಾರ್ಯಕ್ರಮವನ್ನು ಆರಂಭಿಸಿ ಮಾರನೆಯ ದಿನ ಬೆಳಿಗ್ಗೆ ಮುಕ್ತಾಯಗೊಳಿಲಾಗುವುದು. ಶ್ರೀ ಜಗನ್ಮಾತಾ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಕಡವಿನಕಟ್ಟಾ ಇವರ ಮುಂದಾಳತ್ವದಲ್ಲಿ ನಡೆಯಲಿರುವ ಭಜನಾ ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಬೆಳ್ನಿ, ಭಜನಾ ಮಂಡಳಿ ಬಂದರ, ಶ್ರೀ ವೀರಜಟ್ಕ ಭಜನಾ ಮಂಡಳಿ ಮಹಿಳಾ ತಂಡ ತೆಂಗಿನಗುAಡಿ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಹಿಳಾ ತಂಡ ಅಳ್ವೇಕೋಡಿ, ಈಶ್ವರ ಹಕ್ರೆ ಭಜನಾ ಮಂಡಳಿ, ಶ್ರೀ ವೀರಜಟ್ಕ ಭಜನಾ ಮಂಡಳಿ ತೆಂಗಿನಗುAಡಿ, ಶ್ರೀ ಸೀತಾರಾಮ ಭಜನಾ ಮಂಡಳಿ ಕರಿಕಲ್ ಸೇರಿದಂತೆ ಹವ್ಯಾಸಿ ಭಜನಾ ಪ್ರಮುಖರು ಭಾಗವಹಿಸಲಿದ್ದಾರೆ ಎಂದೂ ತಿಳಿಸಲಾಗಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ