ಕುಮಟಾ ; ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಗೆಳೆಯರ ಬಳಗದ ವತಿಯಿಂದ ಕುಮಟಾ ಪಟ್ಟಣದ ಗಿಬ್ ಹೈಸ್ಕೂಲ್ನ ರಾಜೇಂದ್ರ ಪ್ರಸಾದ ಹಾಲ್ನಲ್ಲಿ ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿದ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಉದ್ಯೋಗಾಕಾಂಕ್ಷಿಗಳನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಕೇವಲ ಮಾಕ್ಸ್ ಕಾರ್ಡ್ ನೋಡಿ ವ್ಯಕ್ತಿಯ ಅರ್ಹತೆ ಅಳೆಯುವುದು ಕಷ್ಟ. ಉತ್ತಮ ಅಂಕ ಗಳಿಸಿದ್ದರೂ ಬಹಳ ಜನರಿಗೆ ಸಮಾಜದ ಜೊತೆಗೆ ಬದುಕುವ ಕಲೆ ತಿಳಿದಿರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯುವಕರನ್ನು ಸಜ್ಜು ಮಾಡುವ ಕೆಲಸ ಈ ಭಾಗದಲ್ಲಿ ನಡೆಯಬೇಕು. ಸೂರಜ್ ನಾಯ್ಕ ಅವರಂತಹ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಿಂದ ಮಾತ್ರ ಅದು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಇದು ಕಾಟಾಚಾರಕ್ಕೆ ಮಾಡುತ್ತಿರುವ ಉದ್ಯೋಗ ಮೇಳ ಅಲ್ಲ. ಇಲ್ಲೇ ಸಂದರ್ಶನ ಮುಗಿದು ಸಂಜೆಯೊಳಗೆ ಆಯ್ಕೆಯಾದವರ ಪಟ್ಟಿ ನೀಡಬೇಕು ಎಂದು ಕಂಪನಿಯವರಿಗೆ ಸೂಚನೆ ನೀಡಿಯೇ ಆಮಂತ್ರಿಸಲಾಗಿದೆ. ಈ ಮೇಳದ ಎಲ್ಲ ಶ್ರೇಯಸ್ಸು ಗೆಳೆಯರ ಬಳಗಕ್ಕೆ ಸಲ್ಲಬೇಕು ಎಂದರು
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶಶಿಭೂಷಣ ಹೆಗಡೆ , ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ, ತಾಲೂಕಾಧ್ಯಕ್ಷ ಸಿ.ಜಿ.ಹೆಗಡೆ, ಉದ್ಯಮಿ ಸಂಪತ್ ಕುಮಾರ್, ಜಿ.ಪಂ.ಸದಸ್ಯೆ ವೀಣಾ ಸೂರಜ್ ನಾಯ್ಕ, ಹಿರಿಯರಾದ ಜಿ.ಕೆ.ಪಟಗಾರ, ವಕೀಲ ವೀರೇಂದ್ರ ನಾಯಕ , ಮಾತೋಶ್ರೀ ಸಹಕಾರಿಯ ವಿನಯ ನಾಯಕ, ರೋಟ್ರಾöಕ್ಟ್ ಅಧ್ಯಕ್ಷ ಸುದರ್ಶನ ಶಾನಭಾಗ ಹಾಗೂ ಸೂರಜ್ ಗೆಳೆಯರ ಬಳಗದ ಪ್ರಮುಖರು ಉಪಸ್ಥಿತರಿದ್ದರು.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ