May 11, 2024

Bhavana Tv

Its Your Channel

ಮಾಜಿ ಶಾಸಕರಿಂದ ಮಲ್ಲಿಗೆ ಬೆಳೆಗಾರರಿಗೆ ಅನ್ಯಾಯ: ಶಾಸಕ ಸುನೀಲ ನಾಯ್ಕ ನೇರವಾಗಿ ಆರೋಪ

ಭಟ್ಕಳ ; ಭಟ್ಕಳದ ಪ್ರಮುಖ ತೋಟಗಾರಿಕಾ ಬೆಳೆಯಲ್ಲಿ ಮಲ್ಲಿಗೆ ಸಹ ಒಂದಾಗಿದೆ. ಸಾಕಷ್ಟು ಕುಟುಂಬವೂ ಇದನ್ನೇ ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ. ಆದರೆ ಈ ಮಲ್ಲಿಗೆ ಬೆಳೆಗಾರರಿಗಿಂತ ದಲ್ಲಾಳಿಗಳಿಗೆ, ಎಜೆಂಟರಿಗೆ ಅನೂಕೂಲವಾಗುವಂತೆ ಸಹಕಾರ ಮಾಡುತ್ತಿರುವುದು ಭಟ್ಕಳ ಕಾಂಗ್ರೆಸನವರಾಗಿದ್ದಾರೆ. ಅದರಲ್ಲು ಮಾಜಿ ಶಾಸಕರು ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಮಲ್ಲಿಗೆ ಬೆಳೆಗಾರರ ಬೆಳೆಗಳಲ್ಲಯೂ ಎಜೆಂಟರ ಮೂಲಕವೇ ಮಂಗಳುರು, ಕುಂದಾಪುರ, ಉಡುಪಿಗೆ ತೆರಳಬೇಕೆಂಬ ವ್ಯವಸ್ಥೆ ಮಾಡಿರುವುದು ಕಷ್ಟ ಪಟ್ಟು ಬೆಳೆದ ಮಲ್ಲಿಗೆ ಬೆಳೆಗಾರರಿಗೆ ನಷ್ಟ ಹಾಗೂ ಸಮಸ್ಯೆಯಾಗುತ್ತಿದೆ. ನೇರವಾಗಿ ಮಲ್ಲಿಗೆ ಬೆಳೆಗಾರ ಮಲ್ಲಿಗೆ ಹೂವನ್ನು ಮಾರುಕಟ್ಟೆಗೆ ನೀಡಲು ಅಸಾಧ್ಯದ ಪರಿಸ್ಥಿತಿ ಇದೆ. ದಲ್ಲಾಳಿಗಳಿಗೆ ಅಥವಾ ಎಜೆಂಟರಿಗೆ ನೀಡಲೇ ಬೇಕು ಬೇಕಿದ್ದರೆ ವಾಹನದ ಬಾಡಿಗೆ ಬೇಕಿದ್ದರೆ ನಾನು ನೀಡಲು ಸಿದ್ಧ ಎಂಬ ವ್ಯವಸ್ಥೆಗೆ ಮಾಜಿ ಶಾಸಕರು ಮುಂದಾಗಿದ್ದಾರೆ ಎಂದು ಶಾಸಕ ಸುನೀಲ ನಾಯ್ಕ ಬಿಜೆಪಿ ರೈತ ಮೋರ್ಚಾ ಭಟ್ಕಳ ಮಂಡಲ ರೈತ ಉತ್ಪಾದಕರ ಸಂಸ್ಥೆಗಳ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ನೇರವಾಗಿ ಆರೋಪ ಮಾಡಿದ್ದಾರೆ.

error: