April 30, 2024

Bhavana Tv

Its Your Channel

ಸರಕು ತುಂಬಿದ್ದ ಲಾರಿ ಪಲ್ಟಿಯಾಗಿ ಲಾರಿ ಕ್ಲೀನರ್ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೯ರ ನಡೆದಿದೆ.

ಹೊನ್ನಾವರ; ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯ ತನದ ಚಾಲನೇಯಿಂದ ಸರಕು ತುಂಬಿದ್ದ ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೯ರ ಗೆರುಸೊಪ್ಪಾ ಸುಳೆಮೂರ್ಕಿ ತಿರುವಿನಲ್ಲಿ ಶುಕ್ರವಾರ ನಡೆದಿದೆ.

ಕಲ್ಲಿದ್ದಲು ತುಂಬಿದ್ದ ಲಾರಿಯನ್ನು ಸಾಗರ ಮಾರ್ಗದಿಂದ ಹೊನ್ನಾವರ ಕಡೆಗೆ ಚಲಾಯಿಸುತ್ತಿದ್ದರು ಇದೇ ವೇಳೆ ಗೆರುಸೊಪ್ಪಾ ಸುಳೆಮೂರ್ಕಿ ಕ್ರಾಸ್ ನಲ್ಲಿ ಲಾರಿ ಪಲ್ಟಿಯಾಗಿದೆ. ಈ ವೇಳೆ ಲಾರಿಯ ಚಾಲಕ ಹಾಗೂ ಕ್ಲಿನರ ಇರ್ವರಿಗೂ ಗಂಭೀರವಾದ ಗಾಯಗಳಾಗಿದೆ. ಅಂಬುಲೆನ್ಸ ಮೂಲಕ ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲಿಸುವ ಮುನ್ನವೇ ಲಾರಿ ಕ್ಲಿನರ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾವಿಗಿಡಾದ ದುರ್ದೈವಿ ಕೊಪ್ಪಳ ಜಿಲ್ಲೆಯ ೨೯ವರ್ಷದ ಮಾರುತಿ ಕೃಷ್ಣ ನಾಯ್ಕ ಎಂದು ಗುರುತಿಸಲಾಗಿದೆ. ಗಂಭೀರ ಗಾಯಾಳುವಾದ ಲಾರಿ ಚಾಲಕ ಬಳ್ಳಾರಿ ಜಿಲ್ಲೆಯ ಅಶೋಕ್ ಪೀರು ನಾಯಕ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಇನ್ನೂ ಆರೋಪಿತ ಚಾಲಕನ ವಿರುದ್ದ ಪರಶುರಾಮ ವಾಲ್ಯ ನಾಯಕ ಎನ್ನುವವರು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ

error: