May 10, 2024

Bhavana Tv

Its Your Channel

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊರಿಕೆಯಂತೆ ರಾಜ್ಯದ ಪತ್ರಕರ್ತರನ್ನು ಕೊರೊನಾ ಫ್ರಂಟ್ ಲ್ಯೆನ್ ವಾರಿಯರ್ಸ ಎಂದು ಪರಿಗಣಿಸಿ ಪತ್ರಕರ್ತರಿಗೆ ಕರೊನಾ ಲಸಿಕೆ.

ಭಟ್ಕಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಕೊರಿಕೆಯಂತೆ ರಾಜ್ಯದ ಪತ್ರಕರ್ತರನ್ನು ಕೊರೊನಾ ಫ್ರಂಟ್ ಲ್ಯೆನ್ ವಾರಿಯರ್ಸ ಎಂದು ಪರಿಗಣಿಸಿ ಪತ್ರಕರ್ತರಿಗೆ ಕರೊನಾ ಲಸಿಕೆ ಹಾಕುವ ಕಾರ್ಯಕ್ರಮ ಉತ್ತರ ಕನ್‌ಡ ಜಿಲ್ಲೆಯಲ್ಲಿಸಹ ನಡೆಯಿತು. ಈ ಹಿಂದೆ ಎಲ್ಲ ಜಿಲ್ಲೆಗಳಲ್ಲಿಯೂ ಆರಂಭವಾದಾಗ ನಮ್ಮ ಜಿಲ್ಲೆಯಲ್ಲಿಯೂ ಆರಂಭಿಸುವAತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕ್ರಷ್ಣ ಭಟ್ಟ ಅವರು ಜಿಲ್ಲಾಧಿಕಾರಿಗಳಿಗೆ, ಡಿ.ಎಚ್.ಓ. ಅವರಿಗೆ ಪತ್ರ ಬರೆದು ಕೋರಿದ್ದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರಿಗೂ ಭಟ್ಕಳಕ್ಕೆ ಬಂದಾಗ ಒತ್ತಾಯಿಸಿದ್ದರು. ತಕ್ಷಣ ಕ್ರಮ ಕ್ಯೆಗೊಂಡು ಶನಿವಾರವೇ ವ್ಯವಸ್ಥೆ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜಿಲ್ಲೆಯಲ್ಲಿ ಸುಮಾರು ೧೬೦ಕ್ಕೂ ಹೆಚ್ಚು ಕಾರ್ನಾಟಕ ಕಾರ್ಯನಿರತ ಪತ್ರಕರ್ತರು ಕೊವಿಡ್ ಲಸಿಕೆ ಪಡೆದರು. ಇವರೊಂದಿಗೆ ಉಳಿದ ಪತ್ರಕರ್ತರೂ ಲಸಿಕೆ ಪಡೆದರು.

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: